BEGIN:VCALENDAR
VERSION:2.0
PRODID:-//Kannada Pustaka Habba - ECPv6.15.20//NONSGML v1.0//EN
CALSCALE:GREGORIAN
METHOD:PUBLISH
X-WR-CALNAME:Kannada Pustaka Habba
X-ORIGINAL-URL:https://kannadapustakahabba.com
X-WR-CALDESC:Events for Kannada Pustaka Habba
REFRESH-INTERVAL;VALUE=DURATION:PT1H
X-Robots-Tag:noindex
X-PUBLISHED-TTL:PT1H
BEGIN:VTIMEZONE
TZID:Asia/Kolkata
BEGIN:STANDARD
TZOFFSETFROM:+0530
TZOFFSETTO:+0530
TZNAME:IST
DTSTART:20240101T000000
END:STANDARD
END:VTIMEZONE
BEGIN:VEVENT
DTSTART;TZID=Asia/Kolkata:20251101T110000
DTEND;TZID=Asia/Kolkata:20251101T130000
DTSTAMP:20260421T181932
CREATED:20251006T045541Z
LAST-MODIFIED:20251019T050048Z
UID:59-1761994800-1762002000@kannadapustakahabba.com
SUMMARY:ನವೆಂಬರ್‌ 1: ಕನ್ನಡ ಪುಸ್ತಕ ಹಬ್ಬ 2025 ಉದ್ಘಾಟನೆ
DESCRIPTION:ಉದ್ಘಾಟನಾ ಸಮಾರಂಭದ ವಿವರಗಳು\n\nದಿನಾಂಕ: ನವೆಂಬರ್‌ 1\, 2025\nಸಮಯ: ಬೆಳಗ್ಗೆ 11:00 ಗಂಟೆ\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560019\nಪ್ರವೇಶ: ಎಲ್ಲರಿಗೂ ಮುಕ್ತ\n\n  \nರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸುವ 5ನೇ ಕನ್ನಡ ಪುಸ್ತಕ ಹಬ್ಬ ಇದೇ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ 37 ದಿನಗಳ ಕಾಲ ಬೆಂಗಳೂರಿನ ಕೆಂಪೇಗೌಡ ನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನಡೆಯಲಿದೆ. ಪುಸ್ತಕ ಹಬ್ಬವನ್ನು ಮೈಸೂರು ರಾಜವಂಶಸ್ಥ\, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮಾನ್ಯ ಸಂಸದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಉದ್ಘಾಟಿಸಲಿದ್ದಾರೆ. \nಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾರತ ಸರಕಾರದ ಸಾಮರ್ಥ್ಯ ನಿರ್ಮಾಣ ಆಯೋಗದ ಮಾನವ ಸಂಪನ್ಮೂಲ ಸದಸ್ಯರಾದ ಡಾ|| ಆರ್‌. ಬಾಲಸುಬ್ರಹ್ಮಣ್ಯಂ\, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು\, ಬಹುಶ್ರುತ ವಿದ್ವಾಂಸರು ಪ್ರೊ|| ಮಲ್ಲೇಪುರಂ ಜಿ. ವೆಂಕಟೇಶ ಉಪಸ್ಥಿತರಿರಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ಪರಿಷತ್‌ನ ಅಧ್ಯಕ್ಷರಾದ ಶ್ರೀ ಎಂ.ಪಿ. ಕುಮಾರ್‌ ವಹಿಸಲಿದ್ದಾರೆ. \nಕನ್ನಡ ಪುಸ್ತಕ ಹಬ್ಬ 2025ರ ಉದ್ಘಾಟನೆ\nಬೆಂಗಳೂರಿನ ಕೆಂಪೇಗೌಡನಗರದಲ್ಲಿರುವ ಕೇಶವಶಿಲ್ಪ ಸಭಾಂಗಣದಲ್ಲಿ ನವೆಂಬರ್‌ 1ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. \nತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ\nನವೆಂಬರ್‌ 1\, 2025ರ ಶನಿವಾರ ಬೆಳಗ್ಗೆ 9.30ಗಂಟೆಗೆ ಬೆಂಗಳೂರಿನ ಎನ್‌.ಆರ್‌. ಕಾಲೊನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಿಂದ ತಾಯಿ ಭುವನೇಶ್ವರಿಯ ಭವ್ಯ ಶೋಭಾಯಾತ್ರೆ ಆರಂಭಗೊಳ್ಳಲಿದೆ. ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ ವಿ. ನಾಗರಾಜ್‌\, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ದಿನೇಶ್‌ ಹೆಗ್ಡೆ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ. \n  \n  \n 
URL:https://kannadapustakahabba.com/event/kannada-pustaka-habba-2025-inaguration-date-and-time/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/png:https://kannadapustakahabba.com/wp-content/uploads/2025/10/kannada-pustaka-habba-2025-D.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;TZID=Asia/Kolkata:20251101T060000
DTEND;TZID=Asia/Kolkata:20251101T200000
DTSTAMP:20260421T181932
CREATED:20251006T050153Z
LAST-MODIFIED:20251129T104913Z
UID:68-1761976800-1762027200@kannadapustakahabba.com
SUMMARY:ಕನ್ನಡ ಪುಸ್ತಕ ಹಬ್ಬ 2025: ಲಯಲಾವಣ್ಯ ಕಾರ್ಯಕ್ರಮ
DESCRIPTION:ಕನ್ನಡ ಪುಸ್ತಕ ಹಬ್ಬ 2025ರ ಮೊದಲ ದಿನ ಅಂದರೆ ನವೆಂಬರ್‌ 1ರಂದು ಸಾಹಿತ್ಯ ಮತ್ತು ಸಂಗೀತದ ಸುಂದರ ಸಂಗಮವಾದ ಲಯಲಾವಣ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ಸಂಗೀತದ ಲಯದ ಮೂಲಕ ಆಚರಿಸುವ ಈ ಕಾರ್ಯಕ್ರಮವು ಎಲ್ಲಾ ಸಂಗೀತ ಪ್ರಿಯರಿಗೆ ಮತ್ತು ಸಾಹಿತ್ಯಾಸಕ್ತರಿಗೆ ಒಂದು ಸೊಗಸಾದ ಅನುಭವವನ್ನು ನೀಡಲಿದೆ. \nಕಾರ್ಯಕ್ರಮದ ವಿವರಗಳು\nದಿನಾಂಕ: ನವೆಂಬರ್‌ 1\, 2025\nಸಮಯ: ಸಂಜೆ 6:00\nಸ್ಥಳ: ಕೇಶವಶಿಲ್ಪ ಸಭಾಂಗಣ\, ಕೆಂಪೇಗೌಡನಗರ\, ಬೆಂಗಳೂರು- 560004\nಪ್ರವೇಶ: ಎಲ್ಲರಿಗೂ ಮುಕ್ತ \nಲಯಲಾವಣ್ಯ ಕಾರ್ಯಕ್ರಮವು ಕನ್ನಡ ಕಾವ್ಯ\, ಸಾಹಿತ್ಯ ಮತ್ತು ಸಂಗೀತದ ಸಮ್ಮಿಲನವಾಗಿದ್ದು\, ಶ್ರೀ ವಿ. ಆನೂರು ಅನಂತಕೃಷ್ಣ ಶರ್ಮಾ ಮತ್ತು ಅವರ ತಂಡ ನಡೆಸಿಕೊಡಲಿದೆ. ಲಯಲಾವಣ್ಯ ಕಾರ್ಯಕ್ರಮವು ಕನ್ನಡ ಸಾಹಿತ್ಯ ಮತ್ತು ಸಂಗೀತದ ಒಂದು ಅಪರೂಪದ ಸಂಗಮವಾಗಿದೆ. ಎಲ್ಲಾ ವಯಸ್ಸಿನ ಪ್ರೇಕ್ಷಕರಿಗೆ ಮಧುರ ಅನುಭವ ನೀಡುವ ಕಾರ್ಯಕ್ರಮವಾಗಿದೆ. ಶರ್ಮಾ ಅವರು ದಶಕಗಳಿಂದ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು\, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಾದ ದಾಸರ ಕೀರ್ತನೆಗಳು\, ವಚನಗಳು ಮತ್ತು ಆಧುನಿಕ ಕಾವ್ಯಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಶರ್ಮಾ ಅವರ ತಂಡವು ತಬಲಾ\, ವೀಣೆ\, ವಯೊಲಿನ್‌ ಮತ್ತು ಇತರ ಸಾಂಪ್ರದಾಯಿಕ ವಾದ್ಯಗಳಲ್ಲಿ ಪರಿಣತರಾದ ಕಲಾವಿದರ ಒಂದು ಗುಂಪನ್ನು ಒಳಗೊಂಡಿದೆ. ಈ ತಂಡವು ಸಾಹಿತ್ಯ ಮತ್ತು ಸಂಗೀತದ ಸಾಮರಸ್ಯವನ್ನು ಸೃಜನಾತ್ಮಕವಾಗಿ ಪ್ರಸ್ತುತಪಡಿಸುವಲ್ಲಿ ಖ್ಯಾತಿಗಳಿಸಿದೆ.
URL:https://kannadapustakahabba.com/event/laya-lavanya-event-in-bangalore/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025,ಮನರಂಜನೆ
ATTACH;FMTTYPE=image/png:https://kannadapustakahabba.com/wp-content/uploads/2025/10/kannada-pustaka-habba-layalvanya.png
ORGANIZER;CN="Rashtrotthana Sahitya":MAILTO:sahitya@rashtrotthana.org
END:VEVENT
BEGIN:VEVENT
DTSTART;VALUE=DATE:20251101
DTEND;VALUE=DATE:20251208
DTSTAMP:20260421T181932
CREATED:20251008T013701Z
LAST-MODIFIED:20251009T004823Z
UID:552-1761955200-1765151999@kannadapustakahabba.com
SUMMARY:ಪುಸ್ತಕ ಪ್ರದರ್ಶನ ಮತ್ತು  ಮಾರಾಟ  | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ
DESCRIPTION:ಪುಸ್ತಕ ಪ್ರದರ್ಶನ ಮತ್ತು ರಿಯಾಯಿತಿ ದರದಲ್ಲಿ ಮಾರಾಟ | ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ಬೆಳಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ನಡೆಸಿಕೊಡುವ 5ನೇ ವರ್ಷದ ಪುಸ್ತಕ ಹಬ್ಬವು ಈ ವರ್ಷ ನವೆಂಬರ್‌ 1ರಿಂದ ಡಿಸೆಂಬರ್‌ 7ರವರೆಗೆ ನಡೆಯಲಿದೆ. ಈ ಬಾರಿ ಒಟ್ಟು 37 ದಿನಗಳ ಕಾಲ ಕನ್ನಡ ಪುಸ್ತಕ ಹಬ್ಬ ನಡೆಯಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ\, ಸಾಹಿತ್ಯ ಸಿಂಧು ಪ್ರಕಾಶನ ಮಾತ್ರವಲ್ಲದೆ ಕನ್ನಡದ ಪ್ರಮುಖ ಪ್ರಕಾಶಕರ ಪುಸ್ತಕಗಳು ರಿಯಾಯಿತಿ ದರದಲ್ಲಿ ದೊರಕುತ್ತದೆ. \n*** \nಓದುಗರಲ್ಲಿ ಶುದ್ಧ ರಾಷ್ಟ್ರೀಯ ದೃಷ್ಟಿಯನ್ನು ಮೂಡಿಸುವುದು; ಭಾರತದ ನೈಜ ಇತಿಹಾಸವನ್ನು ಪರಿಚಯಿಸುವುದು; ವಿವಿಧ ಸಾಹಿತ್ಯಪ್ರಕಾರಗಳ ಮೂಲಕ ಭಾರತೀಯ ಸಂಸ್ಕೃತಿ-ಪರಂಪರೆಯ ಮೌಲ್ಯಗಳನ್ನು ಜನಮಾನಸದಲ್ಲಿ ಬೇರೂರಿಸುವುದು – ಈ ಉದ್ದೇಶಗಳನ್ನಿಟ್ಟುಕೊಂಡು ಪುಸ್ತಕಗಳ ಪ್ರಕಟನೆ ಹಾಗೂ ಸದಭಿರುಚಿಯ ಸಾಹಿತ್ಯಪ್ರಸಾರಕ್ಕಾಗಿ 1965ರಲ್ಲಿ ಪ್ರಾರಂಭವಾದದ್ದು ‘ರಾಷ್ಟೋತ್ಥಾನ ಸಾಹಿತ್ಯ’\, ಸ್ವಾತಂತ್ರ್ಯಪೂರ್ವದಲ್ಲಿ ಅತ್ಯಂತ ಪ್ರಖರವಾಗಿದ್ದ ‘ರಾಷ್ಟ್ರೀಯ ಸಾಹಿತ್ಯ’ದ ವಾರಸಿಕೆಯನ್ನು ಮುಂದುವರಿಸಿದ್ದಲ್ಲದೆ ಮತ್ತೆ ಮುನ್ನೆಲೆಗೆ ತಂದು ನಿಲ್ಲಿಸಲು ರಾಷ್ಟೋತ್ಥಾನ ಸಾಹಿತ್ಯವು ನಡೆಸಿದ ಸಫಲಪ್ರಯತ್ನಗಳ ಫಲವಾಗಿ ಇಂದು ಕನ್ನಡದಲ್ಲಿ ‘ರಾಷ್ಟ್ರೀಯ ಸಾಹಿತ್ಯ’ವನ್ನು ಧೈರ್ಯವಾಗಿ ಪ್ರಕಟಿಸುವ ಹತ್ತಾರು ಪ್ರಕಾಶನ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. \nಇತಿಹಾಸ\, ಸಂಸ್ಕೃತಿ\, ರಾಷ್ಟ್ರೀಯತೆ\, ವ್ಯಕ್ತಿತ್ವವಿಕಾಸ\, ಜೀವನಚರಿತ್ರೆ\, ವ್ಯಕ್ತಿಚಿತ್ರಗಳು\, ಪರಿಸರ\, ಆರ್ಥಿಕತೆ\, ಆರೋಗ್ಯ\, ಯೋಗ ಸೇರಿದಂತೆ ವಿವಿಧ ವಿಷಯ-ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ಮುನ್ನೂರಕ್ಕೂ ಹೆಚ್ಚು ಪ್ರಕಟನೆಗಳು: ಮಕ್ಕಳಿಗೆ ನಮ್ಮ ಇತಿಹಾಸ-ಸಂಸ್ಕೃತಿ-ಪುರಾಣಗಳ ಮಹಾಪುರುಷರನ್ನು ಪರಿಚಯಿಸುವುದಕ್ಕಾಗಿ ‘ಭಾರತ-ಭಾರತಿ ಪುಸ್ತಕ ಸಂಪದ’ ಹೆಸರಿನಲ್ಲಿ ಆರುನೂರು ಪುಸ್ತಕಗಳು ನಮ್ಮ ಇದುವರೆಗಿನ ಹೆಜ್ಜೆಗುರುತಿನಲ್ಲಿ ದಾಖಲಾಗಿವೆ. ನಮ್ಮ ಹಲವು ಪ್ರಕಟನೆಗಳು ವಿವಿಧ ಅಕಾಡೆಮಿ ಪ್ರಾಧಿಕಾರ ಸಂಸ್ಥೆಗಳ ಗೌರವ-ಪ್ರಶಸ್ತಿಗಳಿಗೂ ಪಾತ್ರವಾಗಿವೆ. \n‘ಕನ್ನಡ ಪುಸ್ತಕ ಹಬ್ಬ’ – ಸದಭಿರುಚಿಯ ಸಾಹಿತ್ಯ ಪ್ರಸಾರಕ್ಕಾಗಿ ನಾವು ನಡೆಸುತ್ತಿರುವ ವಿಶಿಷ್ಟ ಪ್ರಯತ್ನ. ನಮ್ಮ ಪ್ರಕಟನೆಗಳಲ್ಲದೆ ಕನ್ನಡದ ಬೇರೆ-ಬೇರೆ ಪ್ರಕಾಶಕರ ಪ್ರಕಟನೆಗಳೂ ಈ ‘ಹಬ್ಬ’ದಲ್ಲಿ ಓದುಗರಿಗೆ ವಿಶೇಷ ರಿಯಾಯಿತಿ ಬೆಲೆಯಲ್ಲಿ ದೊರೆಯಲಿವೆ. ಊಟದ ಎಲೆಯಲ್ಲಿನ ಉಪ್ಪಿನಕಾಯಿಯಂತೆ ಕೆಲವು ಇಂಗ್ಲಿಷ್ ಪುಸ್ತಕಗಳೂ ಪ್ರದರ್ಶನದಲ್ಲಿರುತ್ತವೆ. ಜೊತೆಗೆ ಒಂದಿಷ್ಟು ಮಾತು\, ಹರಟೆ\, ಹಾಸ್ಯ\, ಸಂಗೀತ\, ನೃತ್ಯ… ಹೀಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ‘ಹಬ್ಬ’ದ ಸವಿಯನ್ನು ಉಣಬಡಿಸಲಿವೆ. \n‘ಕನ್ನಡ ಪುಸ್ತಕ ಹಬ್ಬ’ದ ನೆಪದಲ್ಲಿ ವಿದ್ಯಾರ್ಥಿಗಳಿಗಾಗಿ ಕೆಲವು ಸ್ಪರ್ಧೆಗಳನ್ನೂ ಆಯೋಜಿಸಲಾಗಿದೆ. ಇವು ಓದಿನ ರುಚಿ ಬಲ್ಲವರಿಗೆ ವೇದಿಕೆ: ಹೊಸಬರಿಗೆ ಓದಿನ ರುಚಿ ಪರಿಚಯಿಸುವ ಅವಕಾಶ…! ಈ ಬಾರಿಯದು ‘ಕನ್ನಡ ಪುಸ್ತಕ ಹಬ್ಬ’ದ 5ನೆಯ ಆವೃತ್ತಿ. ಒಟ್ಟು 37 ದಿನಗಳ ಉತ್ಸವ! \nದಿನವೂ ಬನ್ನಿ! ಜೊತೆಗೆ ಪರಿಚಿತರು-ಸ್ನೇಹಿತರನ್ನೂ ಕರೆತನ್ನಿ! \n‘ಕೇಶವಶಿಲ್ಪ’ ಸಭಾಂಗಣ\, ರಾಷ್ಟೋತ್ಥಾನ ಪರಿಷತ್ ಕೆಂಪೇಗೌಡನಗರ\, ಬೆಂಗಳೂರು 560 004 \nಬನ್ನಿ\, ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸೋಣ.
URL:https://kannadapustakahabba.com/event/book-festival-sales/
LOCATION:Rashtrotthana Sahitya\, Keshava Shilpa\, Kempegowda Nagar\, Bangalore\, Karnataka\, 560004\, India
CATEGORIES:Kannada Pustaka Habba 2025
ATTACH;FMTTYPE=image/jpeg:https://kannadapustakahabba.com/wp-content/uploads/2025/10/HABBAD.jpg
END:VEVENT
END:VCALENDAR