ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಸಹಯೋಗದಲ್ಲಿ ನಡೆಯುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಉತ್ಸವದ 22ನೇ ದಿನವಾದ ಶನಿವಾರ ಅಲಯನ್ಸ್ ವಿ. ವಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅರ್ಥಪೂರ್ಣವಾದ ಪರಿಕಲ್ಪನೆಯೊಂದಿಗೆ ಅದ್ಭುತ ಸಂಯೋಜನೆಯೊಂದಿಗೆ ಕಾಲೇಜು ವಿದ್ಯಾರ್ಥಿಗಳು ಪ್ರೇಕ್ಷಕರನ್ನು ಕಾಲಚಕ್ರದ ಲೋಕಕ್ಕೆ ಕರೆದುಕೊಂಡು ಹೋದರು ಎಂದರೆ ಅತಿಶಯೋಕ್ತಿಯಾಗದು. ಅಪರೂಪದ ಕಲಾಪ್ರಸ್ತುತಿಯ ಅವಿಸ್ಮರಣೀಯ ಕ್ಷಣಗಳು.














































