ಐದನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ನಡೆಯುತ್ತಿರುವ 37 ದಿನಗಳ ಸಾಹಿತ್ಯ ಸಾಂಸ್ಕೃತಿಕ ಉತ್ಸವದ 20ನೇ ದಿನ ಭರತನಾಟ್ಯ ಕಾರ್ಯಕ್ರ ನಡೆಯಿತು. ಪಾದಚಲನೆ ಅತ್ಯಂತ ವೇಗ ಮತ್ತು ನಿಖರತೆಯಿಂದ ಡಾ ಜಯಶ್ರೀ ರವಿ ಅವರು ಹಾಗೂ ತಂಡ ಪ್ರೇಕ್ಷಕರನ್ನು ಮಂತ್ರಮುಗ್ಧರಗೊಳಿಸಿದರು. ಅದ್ಭುತ ಸಂಗೀತ ಸಂಯೋಜನೆಯೊಂದಿಗೆ ಹೆಜ್ಜೆ ಹಾಕಿದ ಗುರು ಮತ್ತು ಶಿಷ್ಯೆಯರು ವೇದಿಕೆಯ ಮೆರಗನ್ನು ಇನ್ನಷ್ಟು ಹೆಚ್ಚಿಸಿದರು.



































