5ನೇ ಕನ್ನಡ ಪುಸ್ತಕ ಹಬ್ಬದ ಪ್ರಯುಕ್ತ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸಂಸ್ಕಾರ ಭಾರತೀ ಬೆಂಗಳೂರು ಇದರ ಸಹಯೋಗದಲ್ಲಿ ನಡೆಯುತ್ತಿರುವ 37 ದಿನಗಳ ಸಾಹಿತ್ಯ -ಸಾಂಸ್ಕೃತಿಕ ಉತ್ಸವದ 11ನೇ ದಿನ ಸಂಜೆ 7 ಗಂಟೆಯಿಂದ ʼಮಾರೀಚ ಮಾಯೆʼ ಏಕವ್ಯಕ್ತಿ ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಶ್ರೀ ದಿವಾಕರ ಹೆಗಡೆ ಕೆರೆಹೊಂಡ ಅವರ ತಾಳಮದ್ದಲೆ ಅರ್ಥಗಾರಿಕೆ, ಶ್ರೀ ಅನಂತ ಹೆಗಡೆ ದಂತಳಿಗೆ ಅವರ ಭಾಗವತಿಕೆ, ವಿದ್ವಾನ್ ಅನಂತ ಪದ್ಮನಾಭ ಫಾಟಕ್ ಅವರ ಮದ್ದಳೆ ಕಾರ್ಯಕ್ರಮದ ಮೆರುಗು ಹೆಚ್ಚಿಸಿತು.

















