ಬ್ರಿಟಿಷರು, ಕಮ್ಯೂನಿಸ್ಟರು ರೂಪಿಸಿರುವ ನಮ್ಮ ಶಾಲಾ-ಕಾಲೇಜುಗಳ ಪಠ್ಯಕ್ರಮ ಹೇಗಿದೆಯೆಂದರೆ, “ಕಳೆದ ಎರಡೂವರೆ ಸಹಸ್ರ ವರ್ಷಗಳಿಂದ ನಮ್ಮ ಮೇಲೆ ವಿದೇಶಿ ದಾಳಿಕೋರರಿಂದ ಆಕ್ರಮಣವಾಗುತ್ತಲೇ ಇದೆ ಮತ್ತು ನಮ್ಮ ದೇಶ ಬರೀ ಸೋಲುತ್ತಲೇ ಬಂದಿದೆ. ನಮ್ಮಲ್ಲಿ ಎದುರೇಟು ನೀಡುವ ಕ್ಷಾತ್ರತೇಜಸ್ಸಾಗಲೀ-ವೀರರಾಗಲೀ ಇಲ್ಲವೇ ಇಲ್ಲ”, ಎನ್ನುವಂತಿದೆ. ಇತ್ತೀಚೆಗಂತೂ ಆಕ್ರಮಣಕಾರಿಗಳನ್ನೇ “ಭಾರತ ಭಾಗ್ಯವಿಧಾತರು”, “ಇಲ್ಲಿಗೆ ಸಂಸ್ಕೃತಿ, ಸಮಾನತೆಗಳನ್ನು ತಂದವರು” ಎಂದು ವೈಭವೀಕರಿಸುವ ಹುನ್ನಾರ ಪ್ರಾರಂಭವಾಗಿದೆ.
ಆದರೆ, ದಾಖಲೆಗಳು-ಆಧಾರಗಳು, ಭಾರತದ ರಾಜ ಮಹಾರಾಜರುಗಳ ಅದ್ಭುತ ಪ್ರತಿರೋಧದ-ಹೋರಾಟದ ವೀರಗಾಥೆಯನ್ನೇ ಹೇಳುತ್ತವೆ. ಸಾಮಾನ್ಯ ಯುಗದ 636ರಿಂದ 1206ರ ವರೆಗಿನ 570 ವರ್ಷಗಳ ಅವಧಿಯ, ವಾಯುವ್ಯ ಭಾರತದ ಸಿಂಧ್- ಕಾಬೂಲ್ ಮುಂತಾದ ರಾಜ್ಯಗಳ ಹಿಂದೂ ವೀರರ ಸತ್ಯಸಂಗತಿಗಳನ್ನು ಹುಸಿ-ಇರಿಹಾಸಕಾರರು ಬೆಳಕಿಗೆ ತಂದೇ ಇಲ್ಲ.
ಓದಲೇಬೇಕಾದ ಅಂತಹ ಅಪರೂಪದ ದಾಖಲೆಗಳ ಉದ್ಗ್ರಂಥ ಈ “ಹಿಂದೂ ವೀರಗಾಥೆ”





Reviews
There are no reviews yet.