ಪ್ರೌಢವಯಸ್ಕರು ತಾವು ಆಪೇಕ್ಷಿಸಿದರೆ ಸಾಮಗ್ರಿಯನ್ನು ಕವನ, ಕಥನ, ಪ್ರಬಂಧ ಮೊದಲಾದ ಯಾವುದೇ ಮಾಧ್ಯಮಗಳ ಮೂಲಕ ಸಂಗ್ರಹಿಸಿಕೊಳ್ಳಬಲ್ಲರು. ಆದರೆ ಎಳೆವಯಸ್ಸಿನವರಲ್ಲಿ ಆ ಮಟ್ಟದ ಕ್ಷಮತೆ ಇರಲಾರದು. ಆದರೆ ಉದಾತ್ತ ಮೌಲ್ಯಗಳನ್ನು ಪರಿಚಯಿಸಬೇಕಾದದ್ದು ಕಿರಿವಯಸ್ಸಿನಲ್ಲಿಯೇ. ಆ ವಯಸ್ಸಿನಲ್ಲಿ ಮನಸ್ಸಿನ ಸ್ಪಂದನವೂ ಕುತೂಹಲವೂ ಮಕ್ಕಳಲ್ಲಿ ತುಂಬಿರುತ್ತವೆ. ಈ ಹಂತದಲ್ಲಿ ಅವರನ್ನು ರೂಪಿಸುವುದು ಸುಲಭ ಸಾಧ್ಯ. ಈ ಹಿನ್ನೆಲೆಯಲ್ಲಿ ಎಳೆವಯಸ್ಸಿನ ಮಕ್ಕಳಲ್ಲಿ ಧ್ಯೇಯನಿಷ್ಠ ಜೀವನ ವಿಧಾನದ ಬಗೆಗೆ ಆಸಕ್ತಿಯನ್ನು ನಿರ್ಮಿಸುವ ಉದ್ದೇಶದಿಂದ ಈ ಕಿರುಪುಸ್ತಕ ರಚಿತವಾಗಿದೆ.
ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ನೆಮ್ಮದಿ ಬದುಕಿಗೆ ಬೇಕಾಗುವ ಕೆಲವು ಸಲಹೆ, ಸೂತ್ರಗಳನ್ನು ತಂದೆಯೊಬ್ಬರು ಮಗಳಿಗೆ ಬರೆದ ಬೋಧಕ ಪತ್ರಗಳ ರೂಪದಲ್ಲಿ ಈ ಪುಸ್ತಕದಲ್ಲಿ ನೀಡಲಾಗಿದೆ. ಭಗವದ್ಗೀತೆ, ಉಪನಿಷತ್ತುಗಳು, ಬೈಬಲ್ ಮೊದಲಾದ ಗ್ರಂಥಗಳ ಮೂಲದ್ರವ್ಯಗಳನ್ನು ಬಳಸಿಕೊಂಡು ಈ ಪುಸ್ತಕವನ್ನು ಬರೆಯಲಾಗಿದೆ. ಬದುಕಿನಲ್ಲಿ ಎಲ್ಲರೂ ಅನುಸರಿಸಬಹುದಾದ ಕ್ರಿಯಾತ್ಮಕವಾದ ಸರಳ ಸೂತ್ರಗಳು ಇಲ್ಲಿವೆ.
ಸಂದೇಶಗಳ ಸಂವಹನಕ್ಕೆ ಹಲವು ಮಾಧ್ಯಮಗಳಿಗೆ. ಆಶಯ,ವಿಷಯಸ್ವರೂಪ, ಉದ್ದಿಷ್ಟ ಗ್ರಾಹಕರ ಮಾನಸಿಕ ಬೆಳವಣಿಗೆಯ ಹಂತ ಮೊದಲಾದ ಸನ್ನಿವೇಷಗಳಿಗೆ ಅನುಗುಣವಾಗಿ ಮಾಧ್ಯಮವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಪ್ರೌಢವಯಸ್ಕರು ತಾವು ಅಪೇಕ್ಷಿಸುವ ಸಾಮಗ್ರಿಯನ್ನು ಕವನ, ಕಥನ, ಪ್ರಬಂಧ ಮೊದಲಾದ ಯಾವುದೇ ಮಾಧ್ಯಮಗಳ ಮೂಲಕ ಸಂಗ್ರಹಿಸಿಕೊಳ್ಳಬಲ್ಲರು. ಎಳೆವಯಸ್ಸಿನವರಲ್ಲಿ ಆ ಮಟ್ಟದ ಕ್ಷಮತೆ ಸಾಮಾನ್ಯವಾಗಿ ಇರಲಾರದು. ಆದರೆ ಉದಾತ್ತ ಮೌಲ್ಯಗಳನ್ನು ಪರಿಚಯಿಸಬೇಕಾದದ್ದು ಕಿರಿವಯಸ್ಸಿನಲ್ಲಿಯೇ. ಆ ವಯಸ್ಸಿನಲ್ಲಿ ಮನಸ್ಸಿನ ಸ್ಪಂದನವೂ ಕುತೂಹಲವು ಮಕ್ಕಳಲ್ಲಿ ತುಂಬಿರುತ್ತವೆ. ಈ ಹಂತದಲ್ಲಿ ಅವರನ್ನು ರೂಪಿಸುವುದು ಸುಲಭಸಾಧ್ಯ. ಈ ಹಿನ್ನಲೆಯಲ್ಲಿ, ಎಳೆವಯಸ್ಸಿನ ಮಕ್ಕಳಲ್ಲಿ ಧ್ಯೇಯನಿಷ್ಠ ಜೀವನವಿಧಾನದ ಬಗೆಗೆ ಆಸಕ್ತಿಯನ್ನು ನಿರ್ಮಿಸುವ ಉದ್ದೇಶದಿಂದ ಈ ಕಿರುಪುಸ್ತಕ ರಚಿತವಾಗಿದೆ. ತಂದೆಯೊಬ್ಬರು ಮಗಳಿಗೆ ಬರೆದ ಬೋಧಕ ಪತ್ರಗಳ ರೂಪದಲ್ಲಿರುವ ಈ ವ್ಯಕ್ತಿತ್ವವಿಕಾಸ ಪೂರಕ ಬರಹಗಳು ವಿದ್ಯಾಭ್ಯಾಸದ ಆರಂಭದ ಹಂತದಲ್ಲಿರುವ ಮಕ್ಕಳಿಗೆ ಆಕರ್ಷಕ ವಾದಾವೆಂದು ಭಾವಿಸಲಾಗಿದೆ.





Reviews
There are no reviews yet.