ನೂರಾರು ಪುಸ್ತಕಗಳು ಪಾಂಡಿತ್ಯಪೂರ್ಣವಾಗಿ ಹೇಳುವ ವಿಚಾರಗಳ ಪ್ರಭಾವಕ್ಕಿಂತಲೂ ವ್ಯಕ್ತಿಯೊಬ್ಬ ಪ್ರತ್ಯಕ್ಷ ಬದುಕಿದ ರೀತಿ, ಅವನ ವ್ಯವಹಾರ, ಮಾತುಕತೆಗಳು ಸುತ್ತಲಿನ ಸಮಾಜದ ಮೇಲೆ ಬೀರುವ ಪ್ರಭಾವ ಇನ್ನೂ ಹೆಚ್ಚು ಗಾಢವಾಗಿರುತ್ತದೆ. ಅಂತಹ ಹದಿನಾಲ್ಕು ಮಂದಿ ಸಾತ್ತ್ವಿಕರ ಬದುಕಿನ ಚಿತ್ರಣಗಳನ್ನು ಈ ಸಣ್ಣ ಪುಸ್ತಕದಲ್ಲಿ ಕೆತ್ತಿಡುವ ಪ್ರಯತ್ನವನ್ನು ಮಾಡಲಾಗಿದೆ.
ಈ ಬರಹಗಳ ಗಾಢತೆ ಹೆಚ್ಚಾಗಲು ಬಹುಮುಖ್ಯ ಕಾರಣ- ‘ನಾನು ಕಂಡದ್ದನ್ನು ಮಾತ್ರ ದಾಖಲಿಸುತ್ತೇನೆ, ಬೇರೇನನ್ನೂ ಅಲ್ಲ’
‘ನಾದೃಷ್ಟಂ ಖಿಲ್ಯತೇ ಕಿಞ್ಚತ್’ ಎಂಬ ಲೇಖಕರೇ ಹಾಕಿಕೊಂಡಿರುವ ನಿಯಮ.
-ಮುಕುಂದ





Reviews
There are no reviews yet.