ಐದನೇ ಕನ್ನಡ ಪುಸ್ತಕ ಹಬ್ಬದ ಅಂಗವಾಗಿ 37 ದಿನಗಳ ಸಾಹಿತ್ಯ-ಸಾಂಸ್ಕೃತಿಕ ಹಬ್ಬವು ಕಳೆದ 20 ದಿನಗಳಿಂದ ಸಂಭ್ರಮದಿಂದ ನಡೆಯುತ್ತಿದ್ದು. ನವೆಂಬರ್ 21 ನೇ ತಾರೀಖಿನಂದು ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಥಣಿಸಂದ್ರ ಹಾಗೂ ಬಿ, ಹೆಚ್, ಎಸ್ ಪೂರ್ಣಪ್ರಜ್ಞವಿದ್ಯಾನಿಕೇತನದ ವಿದ್ಯಾರ್ಥಿಗಳ ಕಲಾಪ್ರದರ್ಶನ ನಡೆಯಿತು. ವಿವಿಧ ಪ್ರಕಾರದ ಕಲಾತ್ಮಕ ಪ್ರಸ್ತುತಿಯ ವಿದ್ಯಾರ್ಥಿಗಳ ಪ್ರತಿಭೆಗಳ ಪ್ರತಿಬಿಂಬದಂತೆ ಕಂಗೊಳಿಸಿದ ಕ್ಷಣ ಕ್ಯಾಮೆರಾ ಕಣ್ಣುಗಳಲ್ಲಿ ಬಂಧಿಯಾಯಿತು.












































