ಕೇಶವಶಿಲ್ಪ ಸಂಭಾಂಗಣದಲ್ಲಿ ನಿನ್ನೆ ಪ್ರೊ. ಎಲ್ ವಿ ಶಾಂತಕುಮಾರಿ ಹಾಗೂ ಶತಾವಧಾನಿ ಡಾ. ಆರ್ ಗಣೇಶ್ ಅವರಿಗೆ ಕಾದಂಬರಿ ಸಾರ್ವಭೌಮ ಅನಕೃ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅನಕೃ ಪ್ರತಿಷ್ಠಾನದ ಅಧ್ಯಕ್ಷರಾದ ಅಶೋಕ್ ಹಾರನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಹಿರಿಯ ಸಾಹಿತಿ ಡಾ|| ಎಸ್ ಆರ್ ರಾಮಸ್ವಾಮಿಯವರು ಪ್ರಶಸ್ತಿ ಪ್ರದಾನ ಮಾಡಿದರು. ಶಶಿಕಿರಣ್ ಬಿ. ಎನ್ ಅಭಿನಂದನೆ ಸಲ್ಲಿಸಿದರು.














