ಸಂಸ್ಕೃತಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ, ಕಶ್ಮೀರದ ಕಲ್ಹಣನ ರಾಜತರಂಗಿಣಿ. ಕ್ರಿ.ಶ. 11ನೇ ಶತಮಾನಕ್ಕೆ ಹಿಂದೆ ಕಶ್ಮೀರವನ್ನು ಆಳಿದ ಎಲ್ಲ ಮಹಾರಾಜರ ವೃತ್ತಾಂತಗಳಿಗೆ ನಮಗೆ ಇರುವ ಏಕೈಕ ಆಕರ ಈ ಕಾವ್ಯ. ಪ್ರಭುತ್ವಕೇಂದ್ರಿತ ಮತ್ತು ರಾಜಕೀಯ ಘಟನಾವಳಿಗಳಲ್ಲದೆ ಸಂಗತ ಸ್ಥಲಪುರಾಣ ಜಾನಪದೀಯಾದಿ ಮೂಲಗಳ ಕಥನಗಳನ್ನೂ ಸಾಮಾಜಿಕ ಜೀವನದ ಸೀಳುನೋಟವನ್ನೂ, ಬೌದ್ಧಮತ ಪ್ರವರ್ತಕರಿಗೂ ಸನಾತನಧರ್ಮಾನುಯಾಯಿಗಳಿಗೂ ನಡುವಣ ಮುಖಾಮುಖಿಯ ಅನೇಕ ವಿವರಗಳನ್ನೂ ಕಲ್ಹಣನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಹೀಗೆ ಈ ಕಾವ್ಯ ಎಲ್ಲ ದೃಷ್ಟಿಗಳಿಂದಲೂ ಸ್ವಾರಸ್ಯಗಳ ಗಣಿಯಾಗಿದೆ.
ಕಲ್ಹಣನ ರಾಜತರಂಗಿಣಿಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆ ಯನ್ನು ಕಸ್ತೂರಿ ಮುರಳೀಕೃಷ್ಣ ಅವರು ಸಿದ್ಧಪಡಿಸಿದ್ದಾರೆ. ಹಲವೊಮ್ಮೆ ಮೂಲದಲ್ಲಿ ನಾಲ್ಕೋ ಆರೋ ಸಾಲುಗಳಷ್ಟು ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣಪ್ರಮಾಣದ ಸ್ವತಂತ್ರ ಕಥಾಸರಣಿಯಾಗಿ ವಿಸ್ತಾರಗೊಂಡಿದೆ. ಹೀಗೆ ಈ ಮಾಲಿಕೆಯಲ್ಲಿ ಇರುವವು ರಾಜತರಂಗಿಣಿ-ಆಧಾರಿತ ಸ್ವತಂತ್ರ ಕಥಾನಕಗಳು.





Reviews
There are no reviews yet.