ಇಪ್ಪತ್ತನೇ ಶತಮಾನದ ಮೊದಲ ದಶಕದಲ್ಲಿ ಹಿಂದೂ ಸಮಾಜದ ಹೆಚ್ಚಿನ ಸಕ್ರಿಯತೆಗಾಗಿ ಎಲ್ಲ ಕ್ಷೇತ್ರಗಳಲ್ಲಿಯೂ ಸ್ವದೇಶೀ ಚಿಂತನೆಯ ಅನುವರ್ತನೆಗಾಗಿ ಅಸಾಮಾನ್ಯ ಸಮರ್ಪಣಭಾವದಿಂದ ಶ್ರಮಿಸಿ ಯಶಃಕಾಯರಾದವರು ಸ್ವಾಮಿ ವಿವೇಕಾನಂದರ ಕರಕಮಲಸಂಜಾತರಾದ ಸೋದರಿ ನಿವೇದಿತಾ. ಅತ್ಯಂತ ಪ್ರತಿಕೂಲ ರಾಜಕೀಯ-ಸಾಮಾಜಿಕ ಸನ್ನಿವೇಶದಲ್ಲಿ ಸಮಾಜಜಾಗೃತಿಗಾಗಿ ಒಬ್ಬ ಸಾಧಕರು ಪರಿಶ್ರಮಿಸಿ, ದಂತಕಥೆಯೆನಿಸುವಂತೆ ತಮ್ಮ ಪದಚಿಹ್ನೆಗಳನ್ನು ಉಳಿಸಿಹೋದ ಇನ್ನೊಂದು ಉದಾಹರಣೆ ದುರ್ಲಭ. ಈ ಅಗಾಧ ಸಾಧನೆಯನ್ನು ಆಕೆ ಹದಿನಾಲ್ಕು ವರ್ಷಗಳಷ್ಟು ಅಲ್ಪಕಾಲದಲ್ಲಿ ಮಾಡಿದುದಂತೂ ವಿಸ್ಮಯಾವಹ. ಸ್ವಾತಂತ್ರ್ಯ ಸಂಗ್ರಾಮದ ಮುನ್ನಡೆಗಾಗಿಯೂ ವಿವಿಧಮುಖ ಸಾಂಸ್ಕೃತಿಕ ಉಜ್ಜೀವನಕ್ಕಾಗಿಯೂ ಸೋದರಿ ನಿವೇದಿತಾರಿಂದ ಸಂದ ಕೊಡುಗೆಯ ಸ್ಮರಣೆ ಚಿರಕಾಲ ಸ್ಪೂರ್ತಿಸ್ಥಾನವಾಗಿ ಉಳಿಯುತ್ತದೆ. ಆ ರೋಮಾಂಚಕ ಗಾಥೆಯ ಪ್ರಮುಖ ಅಂಶಗಳನ್ನು ಈಗಿನ ಪೀಳಿಗೆಗೆ ಪರಿಚಯಿಸುವುದು ಈ ಕೃತಿ ‘ಅಗ್ನಿಪಥಿಕೆ ನಿವೇದಿತಾ’.
ಅಗ್ನಿಪಥಿಕೆ ನಿವೇದಿತಾ | ಎಸ್.ಆರ್. ರಾಮಸ್ವಾಮಿ
Sale!
Rastrottana Sahitya
ಅಗ್ನಿಪಥಿಕೆ ನಿವೇದಿತಾ | ಎಸ್.ಆರ್. ರಾಮಸ್ವಾಮಿ
₹100.00 Original price was: ₹100.00.₹90.00Current price is: ₹90.00.
Category: Rastrottana Sahitya
Tags: Agnipathike Nivedita, Nivedita, S.R. Ramaswamy
Brand: Rashtrotthana Sahitya
Be the first to review “ಅಗ್ನಿಪಥಿಕೆ ನಿವೇದಿತಾ | ಎಸ್.ಆರ್. ರಾಮಸ್ವಾಮಿ” Cancel reply
Related products
-
Rastrottana Sahitya
ಸಾಮಾಜಿಕ ಕ್ರಾಂತಿಸೂರ್ಯ ಡಾ. ಬಾಬಾ ಸಾಹೇಬ್ ಅಂಬೇಡ್ಕರ್
₹500.00Original price was: ₹500.00.₹450.00Current price is: ₹450.00. Buy Now -
Rastrottana Sahitya
ಅಜೇಯ | ಬಾಬು ಕೃಷ್ಣಮೂರ್ತಿ
₹450.00Original price was: ₹450.00.₹405.00Current price is: ₹405.00. Buy Now -
Rastrottana Sahitya
ಚರಿತಪಂಚಕ | ನಾರಾಯಣ ಶೇವಿರೆ
₹300.00Original price was: ₹300.00.₹240.00Current price is: ₹240.00. Buy Now -
Rastrottana Sahitya
ಮತ್ತೆಲ್ಲೂ ಆಗದಿರಲಿ ಇಂತಹ ಹತ್ಯಾಕಾಂಡ | ಮಂಜುನಾಥ ಅಜ್ಜಂಪುರ
₹160.00Original price was: ₹160.00.₹144.00Current price is: ₹144.00. Buy Now





Reviews
There are no reviews yet.